`ಮಿಂಚಾಗಿ ನೀ ಬರಲು` ನಾಳೆಯಿಂದ ತೆರೆಗೆ
Posted date: 03 Thu, Dec 2015 – 10:56:23 AM

ಸ್ಟ್ರಾಬೆರಿ ಎಂಟರ್ ಟೈನ್‌ಮೆಂಟ್ (ಪ್ರೈ)ಲಿ ಲಾಂಛನದಲ್ಲಿ ಮಹೇಶ್ ತಲಕಾಡು, ರಣದೀಪ್‌ಶಾಂತಾರಾಂ ಮಹಾದಿಕ್ ಹಾಗೂ ಮಹೇಶ್‌ಕುಮಾರ್ ಜೈಸ್ವಾಲ್  ಅವರು ನಿರ್ಮಿಸಿರುವ ‘ಮಿಂಚಾಗಿ ನೀ ಬರಲು‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಣದೀಪ್‌ಶಾಂತಾರಾಂ ಮಹಾದಿಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.  ಮಹೇಶ್ ತಲಕಾಡು ಛಾಯಾಗ್ರಹಣ, ಗಿರೀಶ್‌ಕುಮಾರ್ ಸಂಕಲನ, ಮುರಳಿ ಹಾಗೂ ಪ್ರಭು ಶ್ರೀನಿವಾಸ್  ನೃತ್ಯ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸೂರ್ಯ ಸಂಭಾಷಣೆ ಬರೆದಿದ್ದಾರೆ.
ದಿಗಂತ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಕೃತಿ ಖರಬಂದ. ರಮೇಶ್‌ಭಟ್, ದಿಲೀಪ್‌ರಾಜ್, ಅರ್ಚನ, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed